ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

31 December, 2014

ರಾಧೆಯ ಪತ್ರ..

ಕೃಷ್ಣ,

ಸೂಜಿ-ದಾರದ ಹಂಗಿಲ್ಲದ ನಮ್ಮೀ ಬಂಧ
ಜತೆಯಿರದೆಯೂ ಜತೆಗೆ ಉಳಿದ ಸಂಬಂಧ..

ಸಪ್ತಪದಿಯ ನಡೆಯಿಲ್ಲ, ಮಂತ್ರ ಘೋಷವಿಲ್ಲದ ಬಂಧ..
ಯುಗಯುಗದಲೂ ಮರಳುವ ಅನುಬಂಧ..

ಪಾರಿಜಾತದ ಘಮದಲಿ ಮಿಂದೇಳುವ ಒಲವು..
ಮುರಳಿಯ ನಾದದಲಿ ನಲಿಯುವ ಒಲವು..

ರಂಗಿನ ಗರಿಯ ಒಲುಮೆಯ ನೋಟದ ಕಚುಕುಳಿಯು..
ನಿನ್ನೀ ರಾಧೆಗೆ ಅದೇ ನೂರಾನೆಗಳ ಬಲವು!

29 December, 2014

ಮುಂಜಾವು!

ನಭದರಮನೆಯ ಹೆಬ್ಬಾಗಿಲನು ಮುಂಜಾವು ತೆರೆದಳು..


ಬುವಿಯ ಗವಾಕ್ಷಿಗಳಲ್ಲಿರಿಸಿದ ಹಣತೆಗಳು ಬೆಳಗಿದವು!

ಸುಭಾಷಿತ

ಆದಿತ್ಯಚಂದ್ರಾವನಲಾನಿಲೌ ಚ ದ್ಯೌರ್ಭೂಮಿರಾಪೋ ಹೃದಯಂ ಯಮಶ್ಚ|
ಅಹಶ್ಚ ರಾತ್ರಿಶ್ಚ ಉಭೆ ಚ ಸಂಧ್ಯೆ ಧರ್ಮಶ್ಚ ಜಾನಾತಿ ನರಸ್ಯ ವೃತ್ತಮ್||

ಸೂರ್ಯ-ಚಂದ್ರ, ಅಗ್ನಿ-ವಾಯು, ಆಕಾಶ-ಭೂಮಿ, ನೀರು, ಮನಸ್ಸು ಮತ್ತು ಯಮ, ಹಾಗೆಯೇ ದಿನ-ರಾತ್ರಿ, ಮುಂಜಾವು-ಮುಸ್ಸಂಜೆ ಮತ್ತು ಧರ್ಮವು ಮಾನವನ ಆಚರಣೆಯನ್ನು (ವರ್ತನೆಯನ್ನು) ತಿಳಿಯುತ್ತದೆ.

-ಮಹಾಭಾರತ

24 December, 2014

ಒಲವೇ, ನಿನ್ನಿರುವೇ ನನ್ನ ಬಾಳಿಗಾಧಾರ!

ಪ್ರೀತಿ, ಪ್ರೇಮ, ಒಲವು, ಅನುರಾಗ, ಒಲುಮೆ..
ಹೀಗೆ ಹೆಸರುಗಳು ಒಂದೇ ಎರಡೆ, ನೂರಾರು..
ಮುಖವಾಡಗಳು ಹಲವಾರು;

ಒಲವೇ,

ನೀನೋ ಕಲ್ಪನೆಗೂ ನಿಲುಕದವನು..
ಹೆಸರನೂ ಮೀರಿದವನು..
ಕೈಯಳತ್ತಲೇ ಸುತ್ತುತ್ತಾ ಹಿಡಿಯಲು ಸಿಗದೇ ಮರೆಯಾಗುವವನು..
ಸಂಭೋದನೆಯ ಅಳತೆಗೂ ಒಡಪಡದವನೇ
ನಡೆ, ನೀನೆಲ್ಲಿರುವಿಯೋ ನನ್ನನ್ನೂ ಒಯ್ಯು..

ನೀನಿರುವ ತಾಣವೇ ನನಗರಮನೆ..
ನೀ ಉಸಿರಾಡುವ ಗಾಳಿಯೇ ನನಗಾಹಾರ..
ನಿನ್ನೀ ಪಿಸುನುಡಿಯೇ ತೃಷ್ಣೆಗೆ ಆಧಾರ..
ನಿನ್ನ ಕಂಗಳ ನೋಟವೇ ನನಗೆ ನೆಳಲು..
ನಿನ್ನಿರುವೇ ನನ್ನ ಬಾಳಿಗಾಧಾರ!

ಸುಭಾಷಿತ!

ಅಭಿವರ್ಷತಿ ಯೋsನುಪಾಲಯನ್ ವಿಧಿಬೀಜಾನಿ ವಿವೇಕವಾರಿಣಾ|
 ಸ ಸದಾ ಕಲಶಾಲಿನೀಮ್ ಕ್ರಿಯಾಮ್ ಶರದಮ್ ಲೋಕ ಇವಾಧಿತಿಷ್ಠತಿ||

ವಿಧಿಯಿಂದ ನೆಡಲ್ಪಟ್ಟ ಬೀಜಗಳನ್ನು ವಿವೇಕದಿಂದ ಕೂಡಿದ ನೀರಿನಿಂದ ಯಾರು ಪೋಷಿಸಿ ಫಲ ಕೊಡುವ  ಕೆಲಸ ಮಾಡುತ್ತಾರೋ ಅವರು ಶರದ್  ಋತುವಿನಲ್ಲಿ ಸುಖದಿಂದ ಇರುವ ಲೋಕದಂತೆ ನಿರಾಳರಾಗಿರುತ್ತಾರೆ.
-ಭಾರವಿ (ಕಿರಾತಾರ್ಜುನೀಯಮ್)

ಸತ್ ಪಠಣ; ಮನನ!

ಅಹಂಕಾರಸ್ಯ ಚ ತ್ಯಾಗಃ ಪ್ರಮಾದಸ್ಯ ಚ ನಿಗ್ರಹಃ|
ಸಂತೋಷ ಶ್ಚೈಕಚರ್ಯ ಚ ಕೂಟಸ್ಯ ಶ್ರೇಯ ಉಚ್ಯತೆ ||

ಅಹಂಕಾರ ತ್ಯಾಗ, ದೋಷ ನಿಗ್ರಹ, ಸದಾ ಸಂತೋಷದಲ್ಲಿರುವುದು, ಮತ್ತು ಏಕಾಂತವಾಸ ಶ್ರೇಯಸ್ಸಿನ ಶಾಶ್ವತ ಸಾಧನಗಳೆಂದು ಹೇಳುತ್ತಾರೆ.

-ಭೀಷ್ಮ (ಶಾಂತಿಪರ್ವ)

#ಸತ್_ಪಠಣ_ಮನನ

22 December, 2014

ನೀನೆಲ್ಲಿ ಅಲ್ಲಿ ನಾನು..

ಪ್ರೀತಿ, ಪ್ರೇಮ, ಒಲವು, ಅನುರಾಗ, ಒಲುಮೆ..
ಹೀಗೆ ಹೆಸರುಗಳು ಒಂದೇ ಎರಡೆ, ನೂರಾರು..
ಮುಖವಾಡಗಳು ಹಲವಾರು;

ಒಲವೇ,

ನೀನೋ ಕಲ್ಪನೆಗೂ ನಿಲುಕದವನು..
ಹೆಸರನೂ ಮೀರಿದವನು..
ಕೈಯಳತ್ತಲೇ ಸುತ್ತುತ್ತಾ ಹಿಡಿಯಲು ಸಿಗದೇ ಮರೆಯಾಗುವವನು..
ಸಂಬೋಧನೆಯ ಅಳತೆಗೂ ಒಡಪಡದವನೇ
ನಡೆ, ನೀನೆಲ್ಲಿರುವಿಯೋ ನನ್ನನ್ನೂ ಒಯ್ಯು..

ನೀನಿರುವ ತಾಣವೇ ನನಗರಮನೆ..
ನೀ ಉಸಿರಾಡುವ ಗಾಳಿಯೇ ನನಗಾಹಾರ..
ನಿನ್ನೀ ಪಿಸುನುಡಿಯೇ ತೃಷ್ಣೆಗೆ ಆಧಾರ..
ನಿನ್ನ ಕಂಗಳ ನೋಟವೇ ನನಗೆ ನೆಳಲು..
ನಿನ್ನಿರುವೇ ನನ್ನ ಬಾಳಿಗಾಧಾರ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...