ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

05 May, 2014

ಒಲವಿನ ಆಹ್ವಾನ..


ಒಲವೇ,
ನಿನ್ನ ಲೋಕದಲಿ ಜಾತ್ರೆಯೇ ಇಂದು
ಕ್ಷಣಕ್ಕೊಮ್ಮೆ ಮಿಂಚಿ ಗುಡುಗಿ
ನಿದ್ದೆಯಿಂದೆಬ್ಬಿಸುವ ನಿನ್ನ ಡಂಗೂರ
ಪನ್ನೀರ ಸಿಂಚನ ಮೈಮನಕೆ
ಗವಾಕ್ಷಿಯಿಂದಲೇ ತೂರುವ ಮರುತ
ಕಪ್ಪಾಗಸದಿ ತುಂಬಾ ತೇಲುವ
ಬೆಳಕ ತೋರಣದ ರಂಗಮಂಟಪ
ಹೇಳು, ಚುಕ್ಕಿ ಚಂದಿರರ ಗರ್ಬಾ

ನೃತ್ಯಕೆ ಇದು ಇರಬಹುದೇ ಆಹ್ವಾನ!

2 comments:

ಅವಿನಾಶ್ ಅಗ್ನಿಹೋತ್ರಿ said...

ತುಂಬಾ ಚನ್ನಾಗಿದೆ ನಿಮ್ಮ ಬರವಣಿಗೆ..!! ಇಸ್ಟೊಂದು ಚೆಂದನೆಯ ಸಾಲುಗಳನ್ನು ಹುಡುಕಿ, ನೆನೆದು, ರೂಪಿಸಿ ಬರೆಯುವುದು ನಿಜವಾಗಿಯೂ ಒಂದು ಸಹಸ. ನಿಮ್ಮ ಈ ಕುಶಲ ಕ್ರಿಯೆ'ಗೆ ನನ್ನ ಕಡೆ'ಇಂದ Hats' off !!
ವರುಷಗಳ ಹಿಂದೆ ನಾ ಬರೆದ ಕೆಲವು ಪುಟಗಳು, ನಿಮ್ಮ ಒಲವಿನ ಸಾಲುಗಳಿಂದ ನೆನಪಾಗುತಿದೆ..!! ಧನ್ಯವಾದಗಳು..!!

- ಅವಿನಾಶ್

Sheela Nayak said...

:-) ನಮಸ್ತೆ ಅವಿನಾಶ್ ಅಗ್ನಿಹೋತ್ರಿ. ಇಂತಹ ಮೆಚ್ಚಿಗೆಗಳೆ ಮುಂದಿನ ಬರವಣಿಗೆಗೆ ಸ್ಫೂರ್ತಿ! ಮನಪೂರ್ವಕ ಧನ್ಯವಾದ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...