ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

07 February, 2014

ದಾಸ ಸಾಹಿತ್ಯ!

ಅಮ್ಮ ಹೇಳುತ್ತಿದ್ದರು, ಕೈತಟ್ಟಿ, ತಾಳ ಹಾಕಿ ಹರಿನಾಮ ಹೇಳುವ, ಹಾಡುವ ಪರಂಪರೆ ಪ್ರಹ್ಲಾದನಿಂದ ಮೊದಲುಗೊಂಡಿತು!

ಅದರಲ್ಲೂ ಸಾಮೂಹಿಕವಾಗಿ ಎಲ್ಲರೂ ಕೈತಟ್ಟಿ “ಹೇ ಶ್ರೀನಿವಾಸ ಹೇ ವೆಂಕಟೇಶ” ಅಂತ ದ್ವನಿಗೂಡಿಸುತ್ತಿದ್ದರೆ ಅದ್ಹೇಗೆ ಕಲಿಗೆ ತನ್ನ ಮಹಿಮೆ ತೋರಲು ಸಾಧ್ಯವಾದಿತು ಅಂತ ಅನಿಸಿತು!
ಮತ್ತೆ ಮತ್ತೆ ಕೇಳಿದರೂ ತೃಪ್ತಿಯಾಗುತ್ತಿಲ್ಲ ದಾಸಶ್ರೇಷ್ಟರ ಈ ರಚನೆ.. ಅದೆಷ್ಟು ಸರಳವಾಗಿದೆ! ಬಾರಿ ಬಾರಿ ಪುರಂದರದಾಸರನ್ನು ವಂದಿಸಿತು ಮನ!


|| ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
ಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯ ತೇ ನಮಃ ||

ಹೇ ಶ್ರೀನಿವಾಸ.. ಹೇ ವೆಂಕಟೇಶ..
ನಿನ್ನ ನೋಡಿ ಧನ್ಯನಾದೆನೋ
ನಿನ್ನ ನೋಡಿ ಧನ್ಯನಾದೆನೋ ||ಪಲ್ಲವಿ||

ಪಕ್ಷಿವಾಹನ ಲಕ್ಷ್ಮೀರಮಣ
ಲಕ್ಷವಿಟ್ಟು ನೋಡು ಪಾಂಡವ ಪಕ್ಷ
ದೈತ್ಯಶಿಕ್ಷ ರಕ್ಷಿಸೆನ್ನ ಕಮಲಾಕ್ಷ||ಧನ್ಯನಾದೆನೋ||

ದೇಶ ದೇಶ ತಿರುಗಿ ನಾನು
ಆಶಾಬದ್ಧನಾದೆನು ಸ್ವಾಮಿ
ದಾಸನು ನಾನಲ್ಲವೆ ಜಗದೀಶ
ಶ್ರೀಶ ಶ್ರೀನಿವಾಸ|| ಧನ್ಯನಾದೆನೋ ||

ಕಂತುಜನಕ ಕೇಳೋ ಎನ್ನ
ಅಂತರಂಗದ ಆಸೆಯನ್ನು
ಅಂತರವಿಲ್ಲದೆ ಪಾಲಿಸೊ

ಶ್ರೀಕಾಂತ ಪುರಂದರವಿಠ್ಥಲ||ಧನ್ಯನಾದೆನೋ ||ಅಮ್ಮ ಹೇಳುತ್ತಿದ್ದರು, ಕೈತಟ್ಟಿ, ತಾಳ ಹಾಕಿ ಹರಿನಾಮ ಹೇಳುವ, ಹಾಡುವ ಪರಂಪರೆ ಪ್ರಹ್ಲಾದನಿಂದ ಮೊದಲುಗೊಂಡಿತು!

ಅದರಲ್ಲೂ ಸಾಮೂಹಿಕವಾಗಿ ಎಲ್ಲರೂ ಕೈತಟ್ಟಿ “ಹೇ ಶ್ರೀನಿವಾಸ ಹೇ ವೆಂಕಟೇಶ” ಅಂತ ದ್ವನಿಗೂಡಿಸುತ್ತಿದ್ದರೆ ಅದ್ಹೇಗೆ ಕಲಿಗೆ ತನ್ನ ಮಹಿಮೆ ತೋರಲು ಸಾಧ್ಯವಾದಿತು ಅಂತ ಅನಿಸಿತು!
ಮತ್ತೆ ಮತ್ತೆ ಕೇಳಿದರೂ ತೃಪ್ತಿಯಾಗುತ್ತಿಲ್ಲ ದಾಸಶ್ರೇಷ್ಟರ ಈ ರಚನೆ.. ಅದೆಷ್ಟು ಸರಳವಾಗಿದೆ! ಬಾರಿ ಬಾರಿ ಪುರಂದರದಾಸರನ್ನು ವಂದಿಸಿತು ಮನ!


|| ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
ಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯ ತೇ ನಮಃ ||

ಹೇ ಶ್ರೀನಿವಾಸ.. ಹೇ ವೆಂಕಟೇಶ..
ನಿನ್ನ ನೋಡಿ ಧನ್ಯನಾದೆನೋ
ನಿನ್ನ ನೋಡಿ ಧನ್ಯನಾದೆನೋ ||ಪಲ್ಲವಿ||

ಪಕ್ಷಿವಾಹನ ಲಕ್ಷ್ಮೀರಮಣ
ಲಕ್ಷವಿಟ್ಟು ನೋಡು ಪಾಂಡವ ಪಕ್ಷ
ದೈತ್ಯಶಿಕ್ಷ ರಕ್ಷಿಸೆನ್ನ ಕಮಲಾಕ್ಷ||ಧನ್ಯನಾದೆನೋ||

ದೇಶ ದೇಶ ತಿರುಗಿ ನಾನು
ಆಶಾಬದ್ಧನಾದೆನು ಸ್ವಾಮಿ
ದಾಸನು ನಾನಲ್ಲವೆ ಜಗದೀಶ
ಶ್ರೀಶ ಶ್ರೀನಿವಾಸ|| ಧನ್ಯನಾದೆನೋ ||

ಕಂತುಜನಕ ಕೇಳೋ ಎನ್ನ
ಅಂತರಂಗದ ಆಸೆಯನ್ನು
ಅಂತರವಿಲ್ಲದೆ ಪಾಲಿಸೊ
ಶ್ರೀಕಾಂತ ಪುರಂದರವಿಠ್ಥಲ||ಧನ್ಯನಾದೆನೋ ||

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...