ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

24 October, 2013

ವೇದ ಪುರುಷನ ಸುತನ ಸುತನ ಸಹೋದರನ ಹೆಮ್ಮಗನ ಮಗನ ತಳೋದರಿಯ ಮಾತುಳನ ಮಾವನ ಅತುಳ ಭುಜಬಲದಿ, ಕಾದಿಗೆಲಿದನಣ್ಣನವ್ವೆಯ ನಾದಿನಿಯ ಜಠರದಲಿ ಜನಿಸಿದ ಅನಾದಿ ಮೂರುತಿ ಸಲಹೋ ಕೃಷ್ಣ ಗದುಗಿನ ವೀರ ನಾರಾಯಣ||


ಇದು ಸುಮಾರು ೩೦ ವರ್ಷದ ಹಿಂದೆ ಕೇಳುತ್ತಿದ್ದ ಹಾಡು.  ಈ ಹಾಡನ್ನು ಶ್ರೀ ವಾಸುದೇವಾಚಾರ್ಯರು ಪ್ರವಚನ ಪ್ರಾರಂಭಿಸುವ ಮೊದಲು ಶ್ರೀ ನಾರಾಯಣಾಚಾರ್ಯರು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅದರ ಅರ್ಥ ತಿಳಿದ ನಂತರ ಮತ್ತೂ ಹತ್ತಿರವಾಗಿತ್ತು ಹೃದಯಕ್ಕೆ ಈ ಹಾಡು.!  ಈ ಹಾಡು ನಮ್ಮೆಲ್ಲರಿಗೂ ಬಹಳ ಪ್ರಿಯವಾಗಿತ್ತು. ಇವತ್ತು ಪೂರ್ವಾಹ್ನ ಅಮ್ಮ ಹಾಡುವುದನ್ನು ಕೇಳಿ ಮನಸ್ಸು ಮತ್ತೆ ೩೦ ವರ್ಷ ಹಿಂದೆ ಹೋಯಿತು. ಪ್ರಫುಲ್ಲವಾಯಿತು. ಫೇಸ್ ಬುಕ್ ಮಿತ್ರರೊಂದಿಗೆ ಹಂಚಿಕೊಳ್ಳುವ ಅನಿಸಿತು. ಮಿತ್ರರೇ, ಈ ಹಾಡಿನಲ್ಲಿ ಬರುವ ಒಗಟಿನಂತಿರುವ ಸಂಬಂಧಗಳನ್ನು ಬಿಡಿಸಲು ಯತ್ನಿಸುವಿರಾ? ಸರಿಯಾದ ಉತ್ತರ ನಾಳೆ ಹಾಕುವೆ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...