ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

27 September, 2013

ಪ್ರತಿಭಟಿಸುವುದು ನಮ್ಮ ಮೂಲಭೂತ ಹಕ್ಕು.. ಖಂಡಿತ, ಆದರೆ.. !!!

ಪ್ರತಿಭಟಿಸುವುದು ನಮ್ಮ ಮೂಲಭೂತ ಹಕ್ಕು.. ಖಂಡಿತ, ಆದರೆ.. !!!

ಎಂದಿನಂತೆ ಇಂದೂ ಬೆಳಿಗ್ಗೆ ಸರಿಸುಮಾರು  6.30ಕ್ಕೆ ಹಾಲು ತರಲು ಹೋಗುತ್ತಿದ್ದವಳಿಗೆ ನಿತ್ಯದಂತೆ ನಮ್ಮ ಓಣಿಯಿಂದ ಹೊರಬರುವಾಗ ಮೊದಲು ನೋಟಕ್ಕೆ ಸಿಗುವುದೇ ಕಸದ ತೊಟ್ಟಿ. ಒಂದು ಅರ್ಧ ಮೀಟರ್ ದೂರದಲ್ಲಿ ರಿಕ್ಷವೊಂದು ಬಂದು ನಿಂತಿತು.  ನಾನು ನೋಡು ನೋಡುತ್ತಿದ್ದಂತೆ ಆ ಡ್ರೈವರ್ ತನ್ನ ಕಾಲ ಬಳಿಯಲ್ಲಿದ್ದ ಬಾಲ್ದಿಯನ್ನು ಎತ್ತಿ ಅದರಲ್ಲಿದ್ದ ಕಸವನ್ನು ಹೊರಬಿಸುಟ.. ಪ್ಲಾಸ್ಟಿಕ್ ಚೀಲಗಳು, ಅನ್ನದ ಅಗುಳುಗಳು, ಬಹುಶಃ ಚಿಕ್ಕನಿನ ಎಲುಬುಗಳು.. ಎಲ್ಲಾ ಗಾಳಿಯಲ್ಲಿ ಕೆಲವು ಸೆಕಂಡುಗಳು ಹಾರಾಡಿ ಮತ್ತೆ ನೆಲಕ್ಕೆ ಮರಳಿದವು. ಆತ ಬುರ್ ಎಂದು ಮಿಂಚಿನಂತೆ ಅಲ್ಲಿಂದ ಮಾಯವಾದ. ನಾನು ಈ ದೃಶ್ಯವನ್ನು ನೋಡುತ್ತಾ ಸ್ತಬ್ಧಳಾಗಿ ಬಿಟ್ಟೆ. ನಾವು ನಾಗರಿಕರೇ!!! ನಾವು ಪ್ರತಿಭಟಿಸಬೇಕಾಗಿರುವುದು ಇಂತಹುದನ್ನು.. ನನಗದು ಮಾಡಲಾಯಿತೆ? ಅದೇನೂ ನಿರ್ಜನ ರಸ್ತೆಯಾಗಿರಲಿಲ್ಲ.. ವಾಕ್ ಹೋಗುವವರು, ನನ್ನಂತೆ ಹಾಲು ಪೇಪರ್ ತರಲೆಂದು ಬಂದವರೂ ಇದ್ದರು. ಯಾರೂ ಆತನನ್ನು ತಡಿಯಲಿಲ್ಲ.. ಈಮೊದಲೇ ಕಸದ ತೊಟ್ಟಿಗಿಂತ ಅದರ ಸುತ್ತಲೇ ಕಸದ ರಾಶಿ ಹರಡಿತ್ತು.. ಇನ್ನು ಅದು ಪುರಸಭೆಯ ಲಾರಿ ಬರುವವರೆಗೂ ವಾಹನಗಳ ಚಕ್ರಕ್ಕೆ ಸಿಲುಕಿ ಕೆಲವು ಮೀಟರ್ ವರೆಗೂ ಸಾಗುತ್ತದೆ.. ಪರಿಸರದಲ್ಲಿ ಪರಿಮಳ ಹರಡಿಸುತ್ತದೆ!

 ಅರಾಜಕೀಯತೆ ವಿರುದ್ಧದ ದನಿ ಈ ಪ್ರಾಥಮಿಕ ಹಂತದಿಂದಲೇ ಆರಂಭದಿಂದಲೇ ಆಗಬೇಕು.. ಮೊದಲು ನಾವು ನಮ್ಮ ಮನಸ್ಥಿತಿ ಶುದ್ಧವಾಗುತ್ತಲೇ ತನ್ತಾನೇ ಡೆಲ್ಲಿ ಬೆಂಗಳೂರಿನ ಗದ್ದುಗೆಗಳೂ ಶನಿಯ ಗ್ರಹಣದಿಂದ ಹೊರಬರುತ್ತವೆ!


No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...