ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

15 August, 2013

ಸ್ವತಂತ್ರ ದಿನದ ಮುಂಜಾವು!

-
ಸುಖ ದುಃಖೆ ಸಮೇ ಕೃತ್ವಾ ಲಾಭಾ ಲಾಭೌ ಜಯಾ ಜಯೌ|

ತಥೋ ಯುದ್ಧಯಾ ಯುಜ್ಯಸ್ವ ನೈವಮ್ ಪಾಪಮ್ ಅವಪ್ಸ್ಯಸಿ||


ಕರ್ಮಣ್ಯೆವಾಧಿಕಾರಸ್ತೆ ಮಾ ಫಲೇಷು ಕದಾಚನ|

ಮಾ ಕರ್ಮಫಲಹೇತುರ್ಭೂರ್ಮಾ  ತೆ ಸಂಗೋಸ್ತ್ವಕರ್ಮಣಿ||

ಸ್ವಂತ್ರದ ದಿನದ ಮುಂಜಾವು ಇಂದು!

ವಿಶೇಷವಾಗಿರಬಹುದು.. ಏನನ್ತಾಳಪ್ಪಾ ಮುಂಜಾವು ಇಂದು?

ಜ್ಯೋತಿ ಬೆಳಗಿದ ದೀಪವನು ಮುಂಜಾವಿನೆದುರಿತ್ತು.. ಕಾದೆ!

ಗಂಭೀರಳಾದಳು.. ಕಣ್ಣಲ್ಲಿ ಹೆಪ್ಪುಗಟ್ಟಿತ್ತು.. ನೋವು!

’ನೋವು ನಲಿವು ಹಗಲು ರಾತ್ರಿಗಳಂತೆ; ಕೆಲವರ ಪಾಲಿಗೆ

ನಲಿವೆನ್ನುವುದು ತದಿಗೆ ಚಂದಿರನಂತೆ, ಕೆಲವರ ಪಾಲಿಗೆ ಪೂರ್ಣ ಚಂದಿರನೇ ಇಲ್ಲ..

ಈ ವೈರಾಗ್ಯದ ಮಾತು ಹೇಳಲಷ್ಟೇ, ಕೇಳಲಷ್ಟೇ ಚಂದ!

ಸುಖ ದುಃಖಗಳನ್ನು ಸಮನಾಗಿ ನೋಡಿ ತಾವರೆಯ ಪತ್ರದ ಮೇಲಿರುವ ಹನಿಯ ಹಾಗೆ ಬದುಕಿನ ಎಲ್ಲಾ ಮಜಲುಗಳನ್ನು ಸಮನಾಗಿ ನೋಡಲು ಅಸಾಧ್ಯ!

ಮತ್ಯಾಕೆ ಆಗಾಗ ನಿನ್ನೀ ಕಪ್ಪು ಕಂಗಳಲ್ಲಿ ಜಲಪಾತ..

ಉಕ್ಕಿ ಹರಿದರೆ ತಾನೇ ನಮ್ಮೊಳಗಿನ ಆರ್ದ್ರ ಭಾವ ಒಣಗುವುದು..

ನೋವು-ನಲಿವು ಭಾವಗಳು ಇಲ್ಲದಿದ್ದಿದ್ದರೆ ನೀನೆಲ್ಲಿ ಸ್ಪಂದಿಸುವೆಯಾ..

ಮಿತ್ರ-ಬಾಂಧವರ ನೋವು ನಲಿವುಗಳು ನಿನ್ನದೇವೆಂಬಂತೆ ಅಪ್ಪಿ ಸ್ಪಂದಿಸುವಿ..

ನಿರ್ಲಿಪ್ತಳಾದರೆ.. ನೀ ಬರೀ ಶಿಲೆ!

ನೋವು-ನಲಿವುಗಳೇ ಮಹಾಕಾವ್ಯಗಳ ಉಗಮ ಸ್ಥಾನ!

ಗರ್ಭದಲಿ ಕಟ್ಟಿಕೊಂಡು ನೀನುಳಿಯಲಾರೆ..

ಅಕ್ಷರ ರೂಪದಿ ಹೆರುವೆ ನಿನ್ನಾ ಭಾವಗಳ..

ನೋಡು, ನೀ ಬರೆದುದೆಲ್ಲವೂ ನಿನ್ನ ಕಂದಮ್ಮಗಳೇ..

ಎಂದಿಗೂ ನಿನ್ನ ಬಿಟ್ಟು ಹೋಗಲಾರವು.. ಕೊನೆಯ ತನಕ ನಿನ್ನ ಜತೆಗೂಡುವವು!

ಪಾಲಿಗೆ ಬಂದದೆಲ್ಲವನ್ನು ಉತ್ಕಂಠವಾಗಿ ಅನುಭವಿಸು.. ನಾಳೆಯೇ ಇಲ್ಲವೆಂಬಂತೆ

ನೋವೂ ನಲಿವೂ ಬರುತ್ತವೆ, ಹೋಗುತ್ತವೆ..
ನಿನ್ನ ಬಿಡಲಾರವು... ಬೆಂಬೆತ್ತುವವು!

ಮತ್ತೆ ಹೊಸ ನಾಳೆಗಾಗಿ ಕಾಯು..

ಬೆಳಕು ಬರುವುದು, ಬಾಳು ಬೆಳಗಿಸುವುದು


ಆಶಾವಾದಿಯಾಗು!

************************************************

ಈ ಜೀವನ ಒಂದು ಸಾಗರದಂತೆ...
ನಾವೆಲ್ಲಾ ಅದರ ಪಯಣಿಗರಂತೆ..
ಬಾಳ ನೌಕೆ ನಡೆಸುವವನು ದೇವರೆಂಬುದು ನಾಮ ಮಾತ್ರ....
ದಡ ಸೇರಬೇಕಾದರೆ ಹುಟ್ಟನ್ನು ನಾವೇ ಹಾಕಬೇಕು.
ಪ್ರಯತ್ನ ನಮ್ಮದು ಫಲಾ ಫಲ ಅವನಿಗೆ ಸೇರಿದ್ದು. .

ಸುಖ ದುಃಖಗಳು ಸಮುದ್ರದಲ್ಲಿ ಏಳುವ ಅಲೆಗಳಂತೆ
ಒಮ್ಮೆ ಸುಖ ಬಂದರೆ, ಮತ್ತೊಮ್ಮೆ ದುಃಖ
ಸಮುದ್ರದ ಅಲೆಗಳಂತೆ ಜೀವನದಲ್ಲಿ ಏರಿಳಿತಗಳು ಸಹಜ.
ಜೀವನದಲ್ಲಿ ಏಕಾತಾನತೆ ಇರಬಾರದು..
ಈ ಬದುಕು ಕಷ್ಟ ಸುಖಗಳ ಸಮ್ಮಿಶ್ರಣ
ನಿಜವಾದ ಅರ್ಥದಲ್ಲಿ ಬದುಕು ಅಂದ್ರೆ ಇದೇನೆ.
ದಾಸರು 'ಸಾಗರದಷ್ಟು ಸುಖಕ್ಕೆ ಸಾಸಿವೆಯಷ್ಟು ಸುಖ ನೋಡಾ' ಎಂದಿದಿದ್ದಾರೆ.
ಈ ಸುಖಕ್ಕಾಗಿ ಮನುಷ್ಯನ ಪರದಾಟವನ್ನು ನೋಡಿಯೇ ದಾಸರು ಹೀಗೆ ನುಡಿದಿರಬೇಕು.

ಬೇವು ಬೆಲ್ಲದಂತಿರುವ ಈ ಜೀವನ ಪ್ರವಾಹ ನಿರಂತರ
ಪ್ರತಿ ದಿನ ಹೊಸ ಮುಂಜಾವು ಬರುವಂತೆ
ಜೀವನದ ಪ್ರತಿಯೊಂದು ಕ್ಷಣವೂ ಹೊಸತೇ...
ಪರಿವರ್ತನೆ ಜಗದ ನಿಯಮ ತಾನೇ,
ಪ್ರತಿಕ್ಷಣವೂ ಹೊಸ ಅನುಭವವನ್ನು ಪಡೆಯುತ್ತೇವೆ..
ಮುಂಜಾವಿನಲ್ಲಿ ಎಲ್ಲವೂ ಸ್ವಚ್ಚ ಶುಭ್ರ..

ಈ ದಿನ ಭಾರತ ದೇಶ ಬ್ರಿಟಿಷರ ಕಪಿಮುಷ್ಟಿಯಿಂದ
ಬಿಡುಗಡೆಯಾದ ದಿನ...
ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತ..
ಮುಂದೆ ಯಾರ ಕಪಿಮುಷ್ಟಿಗೆ ಸಿಗದೇ ದೇಶ ಸುಭದ್ರವಾಗಲಿ
ಎಂದು ಹಾರೈಸುತ್ತ.....
ಏಕತೆಯೊಂದಿಗೆ ಲೀನವಾಗುವ ಮುಂಜಾವು...

ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯವನ್ನು ಕೋರುತ್ತ
ವಿರಮಿಸುವ,

ಇತಿ ನಿಮ್ಮ ಮುಂಜಾವು...

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...