ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

23 August, 2013

ಮತ್ತೆ ಮರುಭೂಮಿಯಾಗಲಿದೆಯೋ ಆ ಎದೆಯಿಂದು!


ಬರಡು ಎದೆಯದು
ಬಿತ್ತಿ ಉತ್ತಿದರೂ
ನೀರು ಹರಿಸಿದರೂ
ಬೆಳೆ ಬೆಳೆಯದೆಂದು
ನಿರ್ಲಕ್ಷ ತೋರುತ್ತಿದ್ದರಂದು..
ಮರುಳು ಹಾರಿಹೋಯಿತೋ..
ಸಣ್ಣಗೆ ಬೀಸಿದ ತಂಗಾಳಿಗೆ
ಧಮನಿಗಳಲಿ ಬಿಸಿರಕ್ತ ಚಿಮ್ಮಿತೋ..
ತಡವೇ ಇಲ್ಲ..
ಬೀಜ ನೆಟ್ಟರು..
ನೀರು ಹೊಯ್ದರು..
ಹಸಿರು ಎತ್ತಿತು ತಲೆ..
ಚಿಮ್ಮಿತು  ಜೀವಸೆಲೆ..
ಪೈರು  ಕೊಯ್ಯುವರಿಲ್ಲದೇ
ಮತ್ತೆ ಒಣಗಿ ಬಾಡಿತು
ಮತ್ತೆ ಮರುಭೂಮಿಯಾಗಲಿದೆಯೋ

ಆ ಎದೆಯಿಂದು!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...