ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

26 July, 2013

ಮುಂಜಾವಿನ ಜತೆಗೊಂದು ಆಲಾಪನೆ!

-
ನಾನು: ಬಿಸಿಲು ಸುಡುವದೆಂದು ಮರದಡಿ ನಾ ಪೋದೆ, ಮರ ಬಗ್ಗಿ ಶಿರದ ಮೇಲೊರಗಿತು ಹರಿಯೆ.

ಯಾರಿಗೆ ಯಾರುಂಟು ಎರವಿನ ಸಂಸಾರ ನೀರಮೆಲಣಗುಳ್ಳೆ ನಿಜವಲ್ಲ ಹರಿಯೇ||


ಮುಂಜಾವು: ಗೊಂಬೆಯಾಟವಯ್ಯ ಬ್ರಹ್ಮಾಂಡವೇ ಆ ದೇವನಾಡುವ ಬೊಂಬೆಯಾಟವಯ್ಯ

ಅಂಬುಜನಾಭನ ಅಂತ್ಯವಿಲ್ಲದ ಧಾತನ ತುಂಬು ಮಾಯವಯ್ಯಾ ಈ ಲೀಲೆಯು

ಬೊಂಬೆಯಾಟವಯ್ಯ ಬ್ರಹ್ಮಾಂಡವೇ ಆ ದೇವನಾಡುವ ಬೊಂಬೆಯಾಟವಯ್ಯ||

ಜಗವ ಸೃಜಿಸಿ, ಗತಿ ಸೂತ್ರವನಾಡಿಸಿ

ನಗುನಗುತಾ ಕುಣಿಸಿ ಮಾಯೆ ಬೀಸಿ

ರಾಗದ ಭೋಗದ ಉರಿಯೊಳು ನಿಲ್ಲಿಸಿ

ಆಗೊಮ್ಮೆ ಈಗೊಮ್ಮೆ ತಾನಾಡಿ ತಾನಲಿವ... “

ನಸುನಗುತಾ ಅನ್ನುತ್ತಾಳೆ ಮುಂಜಾನೆ, “ ಅವನನ್ನೇ ಕೇಳು,

“ತಿಳಿ ಹೇಳಯ್ಯಾ ಒಳಮರ್ಮ ತೋರಯ್ಯಾ, ನಳಿನಾಕ್ಷ ನಿನ್ನಯ ಸಂಕಲ್ಪವೇನಯ್ಯ?”

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...