ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

02 June, 2013

ಬಿಸಿಲ್ಗುದುರೆ!

ಆ ಬಿಸಿಲ್ಗುದುರೆ ಕಣ್ಣೆದುರು ಸುಳಿದಾಗ
ಮೋಹದ ಸುಳಿಯಲ್ಲಿ ನಾ ಸಿಲುಕಿದೆನೇನೋ..
ವಿವೇಚನೆ ಅತ್ತ ಬದಿಗೆ ಸರಿಯಿತೇನೋ
ಅದನಪ್ಪಿ ಮಾಯಾಲೋಕದಲ್ಲೆ ಸುತ್ತಿದೆನೋ.


ಮತ್ತು ತಲೆಗೇರಿತ್ತೇನೋ..
ತಪ್ಪುಗಳಿಗೆಲ್ಲಾ ತೇಪ ಹಚ್ಚಿತು
ಮೋಹಕೆ ಬಲಿಯಾದ
ಮನಸು ಹಾದಿ ತಪ್ಪಿಸಿತು.

ದೊಪ್ಪನೆ ನೆಲಕೆ ಬಿಸುಟು ಮಾಯವಾಯಿತೇ 
ಒಮ್ಮೆಗೆ ಧೂಳು ಆವರಿಸಿ ಅಮಲೆಲ್ಲಾ ಇಳಿದು
ಭ್ರಮೆಯ ಪರದೆ ಸರಿಯಿತು
ವಾಸ್ತವವ ಒಪ್ಪಲು ಮನ ನಿರಾಕರಿಸಿತು
ವಿಧಿಯ ಅಟ್ಟಹಾಸ ಕಿವಿಗಪ್ಪಳಿಸಿತು.

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...