ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

06 June, 2013


ಮುಚ್ಚಿದ ಕಂಗಳಿಂದಿಳಿದು ಒದ್ದೆಯಾದ ಕೆನ್ನೆಗಳ ಒರಸಲಾಗಲಿಲ್ಲ.
ಮುಂಗಾರು ಮಳೆಯ ಆರ್ದ್ರತೆಗೆ ಬೆಚ್ಚಗಿನ ಭಾವ ಕೊಡಲಾಗಲಿಲ್ಲ..
ಬಲಹೀನ ಬೆರಳುಗಳೆಡೆಯಿಂದ ಜಾರುತಿರುವ ಕುಂಚಗಳ  ತಡೆಯಲಾಗಲಿಲ್ಲ..
ಸುಡುತಿರುವ ಹೃದಯದ ಬೆಂಕಿ ಆರಿಸಲಾಗಲಿಲ್ಲ..
ಮುಷ್ಕರ ಹೂಡಿವೆ ಮೈಮನವೆಲ್ಲ
ಕಾಲನ ಕೊನೆಯ ಕರೆಯೇ ಎಲ್ಲದಕೂ ಪರಿಹಾರ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...