ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

26 June, 2013

-
“ರಂಗನಾಯಕ! ರಾಜೀವಲೋಚನ! ರಮಣನೇ! ಬೆಳಗಾಯಿತು, ಏಳು”
ಹಾಡುತ್ತಾ ದಧಿಯ ಕಡೆವ ಯಶೋಧೆಯಾಗುವ ಬಯಕೆ!
ಆ ಮಿಂಚುವ ನೀಳ ಕೇಶರಾಶಿಯನ್ನು ಕಟ್ಟಿ, ನವಿಲುಗರಿಯ ಬಿಗಿದು, ಘಮಘಮಿಸುವ ತುಳಸೀ ಮಾಲೆ ಕೊರಳಿಗೆ ಹಾಕಿ, ಪೀತ ರಂಗಿನ ಪೀತಾಂಬರವನ್ನು ಉಡಿಸಿ, ಕೊಳಲನ್ನು ಉಡಿಗೆ ಬಿಗಿದು, ಬುತ್ತಿಯನ್ನೀವ ಯಶೋಧೆಯಾಗುವ ಬಯಕೆ!

ಹ್ಮೂಂ, ಇಡೇರಲಸಾಧ್ಯವಾದ ಬಯಕೆಗಳನ್ನೆಲ್ಲಾ ಮತ್ತೆ ಹೃದಯದ ಮೂಲೆಗೆಸೆದು ನಿತ್ಯ ಕರ್ಮಕೆ ಮರಳುವ ಮುಂಜಾನೆ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...