ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

24 April, 2013

ತು ಇಸ್ ತರಹ್ ಸೆ ಮೆರಿ ಜಿಂದಗಿ ಮೇ- ಭಾವಾನುವಾದ!



ತು ಇಸ್ ತರಹ್ ಸೆ ಮೆರಿ ಜಿಂದಗಿ ಮೇ - ಭಾವಾನುವಾದದ ಯತ್ನ!
ಚಿತ್ರ-ಆಪ್ ತೋ ಐಸೇನ ಥೆ
ಗಾಯಕಿ- ಹೇಮಲತಾ
ನಿರ್ದೇಶಕ- ಉಷಾ ಖನ್ನ
ಸಾಹಿತ್ಯ- ಇಂದೀವರ್

ನನ್ನೀ ಬದುಕಲ್ಲಿ ನೀನೀ ರೀತಿ ಸೇರಿಹೋಗಿರುವೆಯಲ್ಲ
ನಾ ಕಾಣುವೆ ಎಲ್ಲೆಡೆಯೂ ನಿನ್ನದೇ ಛಾಯೆ ನಲ್ಲ||

ಈ ಬಾನು, ಈ ಮುಗಿಲು, ಈ ಹಾದಿ, ಈ ಗಾಳಿ
ಎಲ್ಲವೂ ಸ್ತಬ್ಧವಾಗಿವೆ ತಮ್ಮ ತಮ್ಮ ಸ್ಥಾನದಲಿ
ಹಲವು ಕಾಲದಿ ಯಾವುದೂ ಕೋರಿಕೆಯಿಲ್ಲವೀ ಲೋಕದಿ
ನನಗೋ ಬದುಕೊಂದು ಪಯಣ ಮತ್ತಾಪಯಣದ ಗುರಿಯೂ ನೀನೇ||

ನಾ ಕಾಣುವೆ ಎಲ್ಲೆಡೆಯೂ ನಿನ್ನದೇ ಛಾಯೆ ನಲ್ಲ
ನನ್ನೀ ಬದುಕಲ್ಲಿ ನೀನೀ ರೀತಿ ಸೇರಿಹೋಗಿರುವೆಯಲ್ಲ||

ಪ್ರತಿಯೊಂದು ಹೂ ಯಾವುದೋ ನೆನಪಿನ ಪರಿಮಳ ಬೀರುವುದಲ್ಲ
ನಿನ್ನದೇ ನೆನಪಿನಲಿ ಜಗವೂ ಎಚ್ಚರವಾಗಿಯೇ ಇರುವುದಲ್ಲ
ಇದೆಲ್ಲ ಹಾಗೆ ಇತ್ತೇ  ಇಲ್ಲಾ ಒಲವಿನ ಹಾರೈಕೆಯೇ
ನೀ ಬಳಿ ಇರುವೆಯೋ ಇಲ್ಲವೋ ನನ್ನೆದುರಿಗಂತೂ ಸದಾ ನೀನಿರುವಿ||

ನಾ ಕಾಣುವೆ ಎಲ್ಲೆಡೆಯೂ ನಿನ್ನದೇ ಛಾಯೆ ನಲ್ಲ
ನನ್ನೀ ಬದುಕಲ್ಲಿ ನೀನೀ ರೀತಿ ಸೇರಿಹೋಗಿರುವೆಯಲ್ಲ||

ಪ್ರತಿಯೊಂದು ಪಯಣವೂ ಒಲವಿನಿಂದಲೇ ಹೊಳೆಯುವುದಲ್ಲ
ಆ ಹೊಳಪಿಲ್ಲದೆ ಬದುಕು ಶೂನ್ಯವಾಗುವುದು ನಲ್ಲ
ಸುಗಮವಾಗುವವು ಹಾದಿಗಳು  ಜತೆಯಿರಲು ಸಹಮನಸ್ಕನು
ಮುಳ್ಳಾಗುವವು ಹಾದಿಗಳು ಒಂಟಿಯಾಗಿ ನಡೆಯಲು||

ನಾ ಕಾಣುವೆ ಎಲ್ಲೆಡೆಯೂ ನಿನ್ನದೇ ಛಾಯೆ ನಲ್ಲ
ನನ್ನೀ ಬದುಕಲ್ಲಿ ನೀನೀ ರೀತಿ ಸೇರಿಹೋಗಿರುವೆಯಲ್ಲ||



No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...