ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

26 October, 2012

ಈ ಪ್ರಕಾಶವು ನಾಂದಿ ಹಾಡಲಿ!










ಈ ಪುಟ್ಟ ಹಣತೆಯ ಬೆಳಕು 
ಬಾಳಿಗೆ ಹೊಸ ಕಾಂತಿಯ ತುಂಬಲಿ!
ನಮ್ಮೊಳಗೆ ಬೇರೂರಿರುವ
ನರಕಾಸುರನ ಕಿತ್ತೆಸೆಯಲಿ!
ಬೆಚ್ಚನೆ ಹೊದ್ದು ಮಲಗಿರುವ
ನೈತಿಕತೆಯ ಬಡಿದೆಬ್ಬಿಸಲಿ!
ಮರೆತ ಮಾನವತೆಯ 
ಗುಣಗಳನ್ನು ಮತ್ತೆ ನೆನಪಿಸಲಿ!
ನಮ್ಮ ಮಣ್ಣಿನ ಸಂಸ್ಕೃತಿಯ
ಬೇರುಗಳನ್ನು ಮತ್ತಿಷ್ಟು ಗಟ್ಟಿಗೊಳಿಸಲಿ!
ಪಾಶ್ಚಿಮಾತ್ಯರ ಷೋಕಿಗೆ ಮರುಳಾದ
ಯುವಜನಾಂಗವ ತಿದ್ದಿ ಹಾದಿಗೆ ತರಲಿ!
ನಾಡಿನ ಉಜ್ವಲ ಭವಿಷ್ಯಕ್ಕೆ
ಈ ಪ್ರಕಾಶವು ನಾಂದಿ ಹಾಡಲಿ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...