ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

10 August, 2012

ಏನನ್ನುವೆ....ಶೈಲೇಶ?




 ಡಬ್, ಡಬ್....ಮೆಲ್ಲನೆ  ಸಣ್ಣದಾಗಿ ಒದೆಯುತ್ತಿದ್ದಾನೆ....
 ಆಹ್.....ಮಧುರವಾದ ನೋವು...
 ಹೊಸ ಅನುಭವ...ಮನದಲ್ಲಿ ಹರುಷ ಉಕ್ಕಿ ಹರಿಯುತಿದೆ...
 ಎದೆಯೊಳಗೆ ನವಿರಾದ ಪುಳಕ....
 ಎದುರಿನಲ್ಲಿರುವ ನಿಲುವುಗನ್ನಡಿಯೊಳಗೆ ಇಣುಕಿದೆ...
 ಅರೆ, ಇದೇನಿದು....ನಾನೇ...ಹೌದು...ಇದು ನಾನೇ...
 ಮೃದುವಾಗಿ  ಹೊಟ್ಟೆಯನ್ನೊಮ್ಮೆ ಸವರಿದೆ...
 ವಸುದೇವ.....ವಸುದೇವ...ನನ್ನ ತುಟಿಯು....ಅಲ್ಲಾಡುತಿದೆ....
 ನೋವು...ಹಾ....ಅಲ್ಲೇ ಕುಸಿದು ಕುಳಿತೆ.
 ಬಂದವನು ಆಧರಿಸಿ....ಕಣ್ಣಲ್ಲೇ ಸಮಾಧಾನ, ಧೈರ್ಯ ಹೇಳಿದ.
 ಬೆಳಕಿನ ಪುಂಜವೊಂದು ಕಾಣಿಸಿದಷ್ಟೇ ಗೊತ್ತು.....
..............................................
ನೋಡೆ, ನೋಡೆ...ನಮ್ಮ ನಂದನ ಹಾಗೆ ಆ ತುಂಟಕಣ್ಗಳು....
ಹುಂ,  ಕಪ್ಪು ಕೂದಲ ರಾಶಿ  ನೋಡು...ನಮ್ಮ ಯಶೋಧೆಗೂ ಹೀಗೆ ಗೊಂಚಲು ಕೂದಲಿತ್ತು....
ಗೋಪಿಯರು...ತಮ್ಮ ತಮ್ಮಲ್ಲೇ ಮಾತುಕತೆ ನಡೆಸಿದ್ದಾರೆ...
ನಾ ಹೆಮ್ಮೆಯಿಂದ ನನ್ನ ಕೃಷ್ಣನ ಮುಖಾರವಿಂದ ಸವರಿದೆ....
ನನ್ನ ಕಣ್ಣು ನಂದನನ್ನು ಹುಡುಕುತಿತ್ತು.....ನಮ್ಮ ಪ್ರೀತಿಯ ಕುರುಹನ್ನು ನೋಡಿದ್ದಾನೆಯೇ?
ಅವನನ್ನೇ ಹೋಲುತ್ತಾನಲ್ಲ...ಈ ನಂದಕಂದ....
ಅಮ್ಮ,  ನಾ ಹಿಡಿಲಾ...ತಮ್ಮನಾ...ಪ್ಲೀಸ್...ನನ್ನ ಮಗಳು ಕೇಳುತ್ತಿದ್ದಾಳೆ....
ನಂದನ ಮುಖ ಹೆಮ್ಮೆಯಿಂದ ಅರಳಿತ್ತು..ಧನ್ಯತಾಭಾವವಿತ್ತು...
ಅದ ಓದಿದ ನನ್ನಲ್ಲಿ ಸಾರ್ಥಕ ಭಾವ ಅರಳಿತು....
ತಬ್ಬಿ ಹಿಡಿದೆ ನನ್ನ ಅರವಿಂದನಯನನ...
ನಿಜ, ಆ ಕಣ್ಗಳು ನನ್ನವನ ದೇಣಿಗೆ....
ನನ್ನ ಮನ ಓದಿದವನಂತೆ ಮನಮೋಹಕ ನಗೆ ಸೂಸಿದ ನನ್ನ ಮಗರಾಯ...
ನೋಡು ನೋಡುತ್ತಿದ್ದಂತೆಯೇ....ಎಲ್ಲರ ಮೋಡಿಮಾಡುತ್ತ ಬೆಳೆದ....
ಗೋಡೆಯಲೆಲ್ಲಾ ಚಿತ್ತಾರ......ಎಲ್ಲೆಲ್ಲೂ ಬಣ್ಣ....
ಹಾಳೆಗಳ ತುಂಬಾ ಬರಹಗಳು....
ಏನೇನೋ ಬರೆದು...ಮನಸೆಳೆಯುವ ಚಿತ್ತಾರಗಳ ಬಿಡಿಸಿ... ಬಣ್ಣಗಳ ಚೆಲ್ಲಿ...
ಎಲ್ಲರ ಶಹಭಾಸ್ ಗಿಟ್ಟಿಸುತ್ತಿದ್ದಾನೆ...
ಅಪ್ಪನ ಮುಖ ನೋಡಬೇಕು....ಏನೋ ಸಾಧಿಸಿದ ಹೆಮ್ಮೆ...
ಹುಂ, ನಾನೇನು ಕಡಿಮೆಯಿಲ್ಲ....ಹಿಮಗಿರಿಯನ್ನೇ ಏರಿದ ಭಾವನೆ.....
....................................................
ಸುಂದರ ಜಗತ್ತು ನನ್ನದಾಗಿತ್ತು....ನಾನು ನನ್ನ ಪುಟ್ಟ ಸಂಸಾರ....
....................................................................
ಕಣ್ಣು ಬಿಡಲೇ ಮನಸಿಲ್ಲ...ಈ ಸುಂದರ ಜಗತ್ತನ್ನು ಬಿಟ್ಟು...ಹೋಗಲಾಗುವುದಿಲ್ಲವಲ್ಲ....
ನಾ ಒಲ್ಲೆ...ಮತ್ತೆ ಈ ಕ್ರೂರ ಜಗದಲ್ಲಿ ಕಾಲಿಡಲಾರೆ ಅಂದೆನಲ್ಲ....
ತಟ್ಟಿ ಎಬ್ಬಿಸಿದ ಮಗ..ಅಮ್ಮ ಕಾಲೇಜಿಗೆ ಹೊತ್ತಾಗುತ್ತೆ...ಬೇಗಬೇಗ ...ತಿಂಡಿ ಮಾಡಿ ಕೊಡು....
...............................................................:-(((((((((
ವಾಹ್, ಎಂಥ ಸುಂದರ ಕನಸು!

ಕೃಷ್ಣನ ಹುಟ್ಟಿದ ಹಬ್ಬ ಮಾಡಿ ಮಲಗಿದವಳಿಗೆ ದೇವಕಿ, ಯಶೋಧೆಯಾದ ಕನಸು....
ಮತ್ತೆ ಅಮ್ಮನಾಗುವ ಹಂಬಲ....

ಅದನ್ನೇ ಅಪ್ಪನಲ್ಲಿ ಹೇಳಿದರೆ....ಮೌನವಾಗಿದ್ದಾನೆ.....
ನಾನಾಗುವೆ ಯಶೋಧೆ, ನೀನಾಗು ನಂದ....ಪ್ಲೀಸ್....ಪ್ಲೀಸ್....
ನಮ್ಮ ಕಂದನೂ ಕೃಷ್ಣನಂತೆ ಸಕಲಕಲಾ ಪರಿಣಿತನಾಗಲಿ....ಏನನ್ನುವೆ....ಶೈಲೇಶ?

2 comments:

Anonymous said...

ಅಕ್ಕಾ :-))))
ಜನ್ಮಾಷ್ಟಮಿಯ ಶುಭಾಶಯಗಳು

Sheela Nayak said...

Hi Kran,
:-) Yes, I had enjoyed Ashtami. Hope u too...

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...