ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

26 May, 2012

’ಶ್ರೀರಾಮಕೃಷ್ಣ ಪರಮಹಂಸ ವಚನವೇದ’- ನನ್ನ ಭಗವದ್ಗೀತೆ!-2


ಭಕ್ತ: "ಭಗವಂತ ದುಷ್ಟರನ್ನೇಕೆ ಸೃಷ್ಟಿಸಿದ?"

ಶ್ರೀರಾಮಕೃಷ್ಣರು: "ಆತನ ಇಚ್ಛೆ , ಆತನ ಲೀಲೆ, ಆತನ ಮಾಯೆಯಲ್ಲಿ ವಿದ್ಯೆಯೂ ಇದೆ. ಅಂಧಕಾರದ ಅವಶ್ಯಕತೆಯೂ ಇದೆ. ಅದು ಬೆಳಕಿನ ಮಹತ್ತನ್ನು ಇನ್ನೂ ಹೆಚ್ಚಾಗಿ ಪ್ರಕಾಶಗೊಳಿಸುತ್ತದೆ. ಕಾಮ, ಕ್ರೋಧ, ಲೋಭ ಇವು ಕೆಟ್ಟವೇನೂ ನಿಜ. ಹಾಗಾದರೇಕೆ ಅವನ್ನು ಸೃಷ್ಟಿಸಿದ್ದಾನೆ ಅಂತೀಯೋ? ಮಹಾಪುರುಷರನ್ನು ತಯಾರುಮಾಡಲು. ಇಂದ್ರಿಯಗಳನ್ನು ಗೆದ್ದರೆ ಮನುಷ್ಯ ಮಹಾಪುರುಷನಾಗುತ್ತಾನೆ. ಜಿತೇಂದ್ರಿಯನ ಕೈಯಲ್ಲಿ ಏನು ತಾನೆ ಸಾಧ್ಯವಿಲ್ಲ? ಭಗವಂತನ ಸಾಕ್ಷಾತ್ಕಾರವೂ ಆತನ ಕೃಪೆಯಿಂದ ದೊರೆತುಬಿಡುತ್ತದೆ. ಮತ್ತೆ, ಬೇರೆ ದೃಷ್ಟಿಯಿಂದ ನೋಡು. ಕಾಮದಿಂದಲೇ ಆತನ ಸೃಷ್ಟಿ-ಲೀಲೆ ಮುಂದುವರಿಯುತ್ತದೆ."
    
 "ದುಷ್ಟರ ಅವಶ್ಯಕತೆಯೂ ಇದೆ. ಒಮ್ಮೆ ಒಂದು ಎಸ್ಟೇಟಿನ ಜನರು ಪುಂಡೆದ್ದರು. ಜಮೀನುದಾರ ಗೋಲೋಕಚೌಧುರಿಯನ್ನು ಅಲ್ಲಿಗೆ ಕಳುಹಿಸಬೇಕಾಯಿತು. ಆತ ಅಂಥಾ ನಿರ್ದಯಿ, ಆತನ ಹೆಸರನ್ನು ಕೇಳಿಯೇ ಜನರು "ತರತರ" ನಡುಗಲಾರಂಭಿಸಿದರು."
     
"ಪ್ರತಿಯೊಂದರ ಅವಶ್ಯಕತೆಯೂ ಇದೆ. ಒಮ್ಮೆ ಸೀತೆ ರಾಮನಿಗೆ ಹೇಳಿದಳು.: ’ರಾಮ, ಅಯೋಧ್ಯೆಯಲ್ಲಿ ಪ್ರತಿಯೊಂದು ಮನೆಯೂ ಅರಮನೆಯಂತಿದ್ದರೆ ಬಹಳ ಚೆನ್ನಾಗಿರುತ್ತದೆ! ಅನೇಕ ಮನೆ ನೋಡುತ್ತೇನೆ, ಹರಕಲು-ಮುರುಕಲು, ಬಹಳ ಹಳೆಯವು.’ ರಾಮ ಹೇಳಿದ: ’ಸೀತೆ, ಎಲ್ಲಾ ಮನೆಗಳೂ ಒಳ್ಳೆ ಸುಂದರವಾದುದೇ ಆಗಿಬಿಟ್ಟರೆ, ಮೇಸ್ತ್ರಿಗಳಿಗೆ ಗತಿ?(ನಗು.) ಭಗವಂತ ಎಲ್ಲಾ ರಕಮುವಾರಿ ಸೃಷ್ಟಿಸಿದ್ದಾನೆ-ಒಳ್ಳೆ ಮರ, ವಿಷದ ಗಿಡ, ಜೊತೆಗೆ ಜೊಂಡು ಕೂಡ. ಪ್ರಾಣಿಗಳಲ್ಲಿಯೂ ಒಳ್ಳೇದು ಕೆಟ್ಟದ್ದು ಎಲ್ಲಾ ಇವೆ- ಹುಲಿ, ಸಿಂಹ, ಹಾವು ಎಲ್ಲಾ."
   - ಶ್ರೀರಾಮಕೃಷ್ಣ ವಚನವೇದ 

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...