ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

06 January, 2010

ನೆನಸದೇ ಬಂದ ಬಾಳಿನ ತಿರುವುಗಳು!

ಮಗನ ಭವಿಷ್ಯಕ್ಕಾಗಿ ಗಣಕ ಸಂಬಂಧೀ ಚಟುವಟಿಕೆಗಳಿಗೆ ತಿಲಾಂಜಲಿಯಿತ್ತು,ಅವನ ಮುಂದಿನ ಕಲಿಗೆ ಬೇಕಾದ ಹಣದ ತಯಾರಿಮಾಡಲು ತೊಡಗಿದೆ. ಸಾಲಸೋಲ ಮಾಡದೇ, ಕೋಚಿಂಗ್ ತರಗತಿಗೂ ಕಳಿಸದೇ ಅವನಿಗೆ ಬೇಕಾದ ಇಂಜಿನಿಯರ್ ತರಗತಿ ಸೇರಲು, ಮಗಳ ಕಾಲೇಜ್ ಮೊತ್ತದ ತಯಾರಿ..... ಹುಂ.....ದುಡಿದೆ. ಇದರಲ್ಲೂ ರಾಮನ ದಯೆ ಬಹಳ! ನನಗೆ ಪ್ರಿಯವಾದ ಪಾಠ(ಮನೆಪಾಠ) ಕಲಿಸುವುದು, ಚಿತ್ರ ಕಲಿಸುವುದು... ಇದರಿಂದ ನನಗೆ ಬೇಕಾದ ವಿತ್ತವು ಸಿಕ್ಕಿತು. ಆದರೆ ನನಗೆ ಗಣಕ ಮಾತ್ರವಲ್ಲ, ತೋಟದ ಕೆಲಸದಿಂದಲೂ ದೂರವುಳಿಯಬೇಕಾಯಿತು. ಇಷ್ಟರ ಮಧ್ಯೆ ನನಗೆ ಚಿತ್ರ ಮಾಡಿಕೊಡುವಂತೆ ಸಂಬಂಧಿಕರೊಬ್ಬರಿಂದ ಕೇಳಿಕೆ ಬಂತು. ಅವರ ಹೂಗಳ ಚಿತ್ರ ಮಾರಾಟದಿಂದ ನಾನು ನೆನದಕ್ಕಿಂತಲೂ ಹೆಚ್ಚಿನ ಮೊತ್ತ ಪಡೆದೆ. ಇದರ ಪ್ರೇರಣೆಯಿಂದ ನಾನು ವನ್ಯಮೃಗಗಳ ಚಿತ್ರ ಮಾಡಿಟ್ಟಿದ್ದೇನೆ, ಮಾರಾಟ ಮಾಡುವ ಉದ್ದೇಶದಿಂದ. ಮುಂದೆ ಅವನಿಚ್ಛೆ!
ಇಲ್ಲಿ ನನ್ನ ಕೆಲಸದ ಹಿಂದೆ ಅಗೋಚರ ಶಕ್ತಿ ಕೆಲಸ ಮಾಡಿತ್ತು. ಬೆಳಗೆ ನಾಲ್ಕಕ್ಕೆ ಸುರುವಾದ ನನ್ನ ದಿನಚರಿ ರಾತ್ರಿ ಹತ್ತರವರೆಗೂ ನಡೆದದ್ದು ಕೇವಲ ಹನುಮನು ನನ್ನಲ್ಲಿ ಶಕ್ತಿಯನ್ನು ತುಂಬಿದ ಕಾರಣ! ಪ್ರತಿ ದಿನ "ಹರಿವ ಲಹರಿ"ಯ ಜ್ಯೋತಿಯ ನೆನಪಾಗುತ್ತಿತ್ತು. ಕನ್ನಡ ಬ್ಲಾಗಿಗರಲ್ಲಿ ನಡೆಯುತ್ತಿದ್ದ ವಿಚಾರ ವಿನಿಮಯ, ಎಲ್ಲಕ್ಕೂ ತಡೆ ಬಿದ್ದರೂ, ಮುಂದೊಂದು ದಿನ ಮತ್ತೆ ಬ್ಲಾಗಿನಲ್ಲಿ ಮನವನ್ನು ತೆರೆಯಲು ಬರುವೆ ಎಂಬ ಆಶಾ ಭಾವನೆಯಿಂದ ಜೀವನದಲ್ಲಿ ಆಸಕ್ತಿಯನ್ನು ಕಳೆಯಲಿಲ್ಲ. ಹಣಮಾಡುವ ಯಂತ್ರವಾಗಿ ಉಳಿದೆನೋ ಎಂಬ ಭಾವನೆಯೂ ಆಗಾಗ ಕಾಡುತ್ತಿತ್ತು.

0 ಅಭಿಪ್ರಾಯ:

Related Posts Plugin for WordPress, Blogger...