ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

31 October, 2007

ಪ್ರೇಮಾ ಕಾರಂತರಿಗೆ ಶೃದ್ಧಾಂಜಲಿ!

ರಂಗಭೂಮಿಯ ಹಿರಿಯ ತಾರೆ ಪ್ರೇಮಾ ಕಾರಂತ ತೆರೆಮರೆಗೆ ಸರಿದರು. ಅವರಿಗಿದೋ ಭಾವಪೂರ್ಣ ಶೃದ್ಧಾಂಜಲಿ! ಪತಿ ದಿವಂಗತ ಬಿ.ವಿ. ಕಾರಂತರ ಜತೆ ರಂಗಭೂಮಿಗೆ ೪೦ವರ್ಷಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಮಗೆ ಅನೇಕ ನಾಟಕಗಳ ಸವಿಯುಣ್ಣಿಸಿದರು. " ಬೆನಕ ಮಕ್ಕಳ ಕೇಂದ್ರ" ಸ್ಥಾಪಿಸಿ ಮಕ್ಕಳ ರಂಗಭೂಮಿಗೆ ಅಪಾರ ಸೇವೆ ಸಲ್ಲಿಸಿದ್ದ ಇವರು ಫಣಿಯಮ್ಮ, ಹಂಸಗೀತೆ, ಗೋಧೂಳಿ, ಕುದುರೆ ಮೊಟ್ಟೆ ಮೊದಲದ ಚಲನ ಚಿತ್ರಗಳಿಗೆ ವಸ್ತ್ರವಿನ್ಯಾಸ ಮಾಡಿ ಪ್ರಸಿದ್ಧರಾಗಿದ್ದಾರೆ.
ಸ್ವಲ್ಪ ಸಮಯದ ಹಿಂದೆ ನಾವು ತೇಜಸ್ವಿಯವರನ್ನು ಕಳೆದುಕೊಂಡೆವು. ಈಗ ಮತ್ತೊಂದು ಭರಿಸಲಾಗದ ನಷ್ಟ. ಇಂತವರು ಕನ್ನಡ ನಾಡಿನಲ್ಲೇ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಹಾರೈಸೋಣ!
******************************************************

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...