ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

29 September, 2007

ಕುಂಚ ಬೆರಳುಗಳ ಆಟ ಓಟ!

ಆತ್ಮ ತೃಪ್ತಿ ಕೊಟ್ಟ

‌ <------ಮುಗಿಸದಚಿತ್ರ


<-------ಮೊದಲ ಚಾರ್ ಕೋಲ್ ಚಿತ











ನನ್ನ ಮೊದಲನೇ ಮತ್ತು ಕೊನೆಯ ತೈಲ ಚಿತ್ರ!---->

03 September, 2007

ನಂದ ಕಿಶೋರನ ಹುಟ್ಟುಹಬ್ಬ!

     





                        ಅನಿಕೇತ, ಬ್ರ್ಹಹ್ಮಜ್ಞಾನಿ, ಗೋಪಿ ವಲ್ಲಭ, ಮುರಲಿಮನೋಹರನಾದ ಶ್ರೀಕೃಷ್ಣನ ಜನ್ಮದಿನದ ಶುಭಾಶಯಗಳು! ಮಹಾವಿಷ್ಣುವಿನ ಪರಿಪೂರ್ಣಾವತಾರವಾದ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಎಲ್ಲಾ ರೀತಿಯ ಮಾನವರಿಗೆ ಹೊಂದುವಂತೆ ವಿವಿದ ರೀತಿಯಲ್ಲಿ ಜ್ಞಾನೋಪದೇಶ ಮಾಡುತ್ತಾನೆ. ಭಕ್ತಿ, ಜ್ಞಾನ, ವಿಜ್ಞಾನ, ಧ್ಯಾನ, ಕರ್ಮ ಯೋಗಗಳ ಮುಲಕ ಅರ್ಜುನನೊಂದಿಗೆ ಎಲ್ಲಾ ಮಾನವ ಕುಲಕ್ಕೂ ವಿಶ್ವ ದರ್ಶನ ಮಾಡಿಸುತ್ತಾನೆ. ಮೋಕ್ಷ ಪ್ರಾಪ್ತಿಗೆ ಸುಲಭವಾದ ಭಕ್ತಿ ಮತ್ತು ಕರ್ಮದ ಮಾರ್ಗ ತೋರಿಸಿದ್ದಾನೆ.
ನಮ್ಮ ಪ್ರತಿಯೊಂದು ಕೆಲಸದಲ್ಲಿ ಪ್ರಾಮಾಣಿಕತನ, ಪ್ರೀತಿ ಮತ್ತು ಭಕ್ತಿಯಿರಲಿ ಎಂದು ಉಪದೇಶಿಸುತ್ತಾನೆ. ನೂರಾರು ಹರಕೆ ಹೊತ್ತು ಎಲ್ಲಾ ದೇವಸ್ಥಾನದ ಭೇಟಿ ಮಾಡಿ ತೋರಿಕೆಯ ಭಕ್ತಿಗಿಂತ ಒಂದೇ ತುಲಸೀ ದಳದ ಅರ್ಪಣೆ ಮೇಲು ಎನ್ನುತ್ತಾನೆ! ತಾಳ ಜಾಗಟೆ ಶಂಖ ಘಂಟೆ ಮೊದಲಾದ ವಾದ್ಯಗಳಿಗಿಂತ ನಿಷ್ಕಳಂಕಿತ ಪ್ರೀತಿ ತೋರಿಸಿ ಎನ್ನುತ್ತಾನೆ. ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ಮಾಡಿ, ಫಲಾಫಲಗಳನ್ನು ಹರಿಯ ಇಚ್ಛೆಗೆ ಬಿಡಿ, ಎಲ್ಲವೂ ಸರಿಯಾಗುತ್ತದೆ ಎಂದು ಭರವಸೆ ಕೊಡುತ್ತಾನೆ.

ಪ್ರಕೃತಿಯಲ್ಲಿ ವಾಸಿಸುವ ಪ್ರತಿಯೊಂದು ಜೀವಿಯನ್ನು ಪ್ರೀತಿಸಿ, ಮಾನವೀಯತೆ ತೋರಿಸಿದರೆ ನಾವು ಭಗವಂತನನ್ನೇ ಆರಾಧಿಸಿದಂತಾಗುತ್ತದೆ. ಎಲ್ಲರಿಗೂ ಸನ್ಮಂಗಳವಾಗಲಿ. ವಿಶ್ವ ಶಾಂತಿ ನೆಲೆಸಲಿ. ಎಲ್ಲಾ ಧರ್ಮ, ಜಾತಿಯನ್ನು ಮೀರಿ ಮಾನವ ಜಾತಿಯೊಂದೇ ಮುಖ್ಯವಾಗಲಿ! ಮಾನವೀಯತೆಯೇ ಮುಖ್ಯ ಗುಣವಾಗಲಿ, ಭಗವಂತನ ಆರಾಧನೆಯ ರೂಪವಾಗಲಿ.

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...